Posted in

Gayatri Mantra in Kannada, Meaning, Benefits

Goddess Gayatri Devi

ನಾಲ್ಕು ವೇದಗಳನ್ನು ಒಳಗೊಂಡಿರುವ ಗಾಯತ್ರಿ ಮಂತ್ರವು ಅತ್ಯಂತ ಪವಿತ್ರವಾದದ್ದು. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಅನೇಕ ಆಧ್ಯಾತ್ಮಿಕ ಹಾಗೂ ಆರೋಗ್ಯಕರ ಪ್ರಯೋಜನಗಳೂ ಇವೆ. ಆದರೆ ಗಾಯತ್ರಿ ಮಂತ್ರವನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನೂ ಮನಸ್ಸಿನ್ಲಲಿಟ್ಟುಕೊಳ್ಳಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

ಹಿಂದೂ ಧರ್ಮದಲ್ಲಿ ವೇದ ಮತ್ತು ಪುರಾಣಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಿಂದೂ ಗ್ರಂಥಗಳನ್ನು ಒಮ್ಮೆ ತಿರುವಿದರೆ ನಮಗೆ ಹೆಚ್ಚಾಗಿ ಕಾಣುವ ಮಂತ್ರವೆಂದರೆ ಅದು ಗಾಯತ್ರಿ ಮಂತ್ರ. ಈ ಮಂತ್ರವನ್ನು ‘ಸಾವಿತ್ರಿ ಮಂತ್ರ’ ಎಂದೂ ಕರೆಯಲಾಗುತ್ತದೆ. ಇದು ಅತ್ಯಂತ ಪ್ರಭಾವಶಾಲಿ ಮಂತ್ರವಾಗಿದೆ.

ಮೊದಲ ಬಾರಿಗೆ, ಈ ಮಂತ್ರವು ಋಗ್ವೇದದಲ್ಲಿ ಕಾಣಿಸಿಕೊಂಡಿತು. ಇದು ಹಿಂದೂ ಪಠ್ಯವಾಗಿ, (ಕ್ರಿ.ಪೂ 1100 – ಕ್ರಿ.ಪೂ 1700 ರ ನಡುವೆ ಬರೆಯಲಾಗಿದೆ). ಭಗವದ್ಗೀತೆಯ ಪುಸ್ತಕದಲ್ಲಿ.

ಗಾಯತ್ರಿ ಮಂತ್ರ:

ಓಂ ಭೂರ್ಭುವಃ ಸ್ವಃ ।
ತತ್ಸವಿತುರ್ವರೇಣ್ಯಂ ।
ಭರ್ಗೋ ದೇವಸ್ಯ ಧೀಮಹಿ ।
ಧಿಯೋ ಯೋನಃ ಪ್ರಚೋದಯಾತ್ ॥

Gayatri Mantra in English:

Aum Bhur Bhuvah Svah ।
Tat Savitur Varenyam
Bhargo Devasya Dheemahi ।
Dhiyo Yo nah Prachodayat ॥

Gayatri Mantra Meaning:

O, Divine mother, our hearts are loaded up with darkness. Kindly make this darkness distant from us and advance brightening inside us.

ಗಾಯತ್ರಿ ಮಂತ್ರದಲ್ಲಿನ ಪ್ರತಿಯೊಂದು ಪದದ ಅರ್ಥ:

ಓಂ– ಸರ್ವಶಕ್ತ ದೇವರು
ಭೂರ್- ನಾವು ಹುಟ್ಟಿದ ಭೂಮಿ
ಭುವ- ಜೀವನದ ಎಲ್ಲಾ ಸಮಸ್ಯೆಗಳನ್ನು ನಾಶಮಾಡುವವನು
ಸ್ವಹ- ಜೀವನಕ್ಕೆ ಸಂತೋಷವನ್ನು ತರುವವನು
ತತ್- ಸರ್ವೋಚ್ಚ ದೇವರು
ಸವಿತೂರ್- ಸೂರ್ಯನಂತೆ ಹೊಳೆಯುವುದು
ವರೇಣ್ಯಂ- ಅತ್ಯುತ್ತಮ
ಭರ್ಗೋ- ಸೂರ್ಯನ ಕಿರಣದಂತಹ ಶುದ್ಧತೆ
ದೇವಸ್ಯ- ದೇವರಿಗೆ ಸೇರಿದವರು
ಧೀಮಹಿ- ಸ್ವ-ಗುಣವಾಗಲು ಯೋಗ್ಯವಾಗಿರುವುದು
ದಿಯೋ- ಬುದ್ಧಿಶಕ್ತಿ
ಯೋ– ಯಾರು
ನಃ – ನಮ್ಮ
ಪ್ರಚೋದಯಾತ್- ಒಳ್ಳೆಯ ಕಾರ್ಯಗಳಿಗೆ ಪ್ರೇರಣೆ

ಗಾಯತ್ರಿ ಮಂತ್ರದ ಪ್ರಯೋಜನಗಳು:

  1. ಇದು ನಮ್ಮ ಕಂಠಪಾಠ ಸಾಮರ್ಥ್ಯ ಮತ್ತು ಕಲಿಕೆಯ ಶಕ್ತಿಯನ್ನು ಹೆಚ್ಚಿಸುತ್ತದೆ.
  2. ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಸಹಾಯಕವಾಗಿದೆಯೆಂದು ಸಾಬೀತಾಗಿದೆ.
  3. ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸುತ್ತದೆ.
  4. ಆಧ್ಯಾತ್ಮಿಕತೆಯ ಹಾದಿಯತ್ತ ಸಾಗಲು ಇದು ಮೊದಲ ಹೆಜ್ಜೆ.
  5. ಇದು ಭಕ್ತನನ್ನು ಎಲ್ಲಾ ಜೀವನದ ಅಡೆತಡೆಗಳಿಂದ ರಕ್ಷಿಸಿ, ಅಂತಃಪ್ರಜ್ಞೆಯಿಂದ ದೈವಿಕ ಕಡೆಗೆ
  6. ಮಾರ್ಗದರ್ಶನ ನೀಡುತ್ತದೆ.
  7. ಮಾನಸಿಕ ಶಾಂತಿ, ಮತ್ತು ಸಂತೋಷವನ್ನು ಕೊಡುತ್ತದೆ.
  8. ಮುಖದ ಮೇಲೆ ಹೊಳಪು ತಂದು, ಉತ್ತಮ ಇಂದ್ರಿಯಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
  9. ಕೋಪ ಕಡಿಮೆ ಮಾಡಿ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.

ಗಾಯತ್ರಿ ಮಂತ್ರವನ್ನು ಜಪಿಸುವುದು ಹೇಗೆ?

ಗಾಯತ್ರಿ ಮಂತ್ರವನ್ನು ಯಾವಾಗ ಬೇಕಾದರೂ ಪಠಿಸಬಹುದು. ಆದರೆ ಪುರಾಣ ಪಠ್ಯಗಳ ಪ್ರಕಾರ, ದಿನದಲ್ಲಿ 3 ಬಾರಿ ಜಪಿಸಬೇಕು.ಮಂತ್ರ ಪಠಿಸುವಾಗ ಪಾಲಿಸಬೇಕಾದ ಕೆಲವು ನಿಯಮಗಳು ಇವೆ. ಅವುಗಳೆಂದರೆ,

  1. ಜಪ ಮಾಡುವಾಗ ಯಾವಾಗಲೂ ನಿಮ್ಮ ಕಣ್ಣುಗಳನ್ನು ಮುಚ್ಚಬೇಕು.
  2. ಮಂತ್ರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಪ್ರತಿಯೊಂದು ಪದದ ಮೇಲೆ ಕೇಂದ್ರೀಕರಿಸಿ.
  3. ಪ್ರತಿಯೊಂದು ಪದದ ಉಚ್ಚಾರಣೆ ಸರಿಯಾಗಿರಬೇಕು.
  4. 108 ಮಣಿ ರುದ್ರಾಕ್ಷಿ ಅಥವಾ ತುಳಸಿ ಮಾಲೆಯಲ್ಲಿ ಮಂತ್ರವನ್ನು ಜಪಿಸುವುದರಿಂದ ಆತ್ಮ ಮತ್ತು ಹೃದಯ ಶುದ್ಧೀಕರಣಗೊಂಡು, ಮನಸ್ಸು ಮತ್ತು ದೇಹ ಶಾಂತವಾಗುತ್ತದೆ.
  5. ಇದನ್ನು ಮೂರು ಸಮಯದ ಅವಧಿಯಲ್ಲಿ ಪಠಿಸಬೇಕು – ಬೆಳಿಗ್ಗೆ (ಸೂರ್ಯೋದಯಕ್ಕೆ 2 ಗಂಟೆ ಮೊದಲು),
  6. ದಿನದ ಮಧ್ಯದಲ್ಲಿ ಮತ್ತು ಸಂಜೆ (ಸೂರ್ಯಾಸ್ತದ ನಂತರ 1 ಗಂಟೆ).
  7. ಬೆಳಿಗ್ಗೆ ಪಠಣ ಮಾಡುವಾಗ, ಪೂರ್ವಕ್ಕೆ ಮುಖ ಮಾಡಬೇಕು. ಸಂಜೆ ಪಠಣ ಮಾಡುವಾಗ, ಪಶ್ಚಿಮಕ್ಕೆ ಮುಖ ಮಾಡಬೇಕು.
  8. ಈ ಮಂತ್ರವನ್ನು ಬೆಳಿಗ್ಗೆ ಸಮಯದಲ್ಲಿ, ಖಾಲಿ ಹೊಟ್ಟೆಯಲ್ಲಿ ಪಠಿಸುವುದು ಒಳ್ಳೆಯದು.

Leave a Reply

Your email address will not be published. Required fields are marked *